ಕಲ್ಲಾಯಿತೆ ಎದೆ

ಯಾಕೆ ತಾಯಿ ಮುಲುಗುತಿರುವಿ
ಕರುಳ ಬಳ್ಳಿಗಳ ಕತ್ತರಿಸಿ ಚಿಲ್ಲಾಪಿಲ್ಲಿಯಾಗಿಸುತ
ನೀನೇ ನುಂಗಿ ನೀರು ಕುಡಿದರೆ ಹೇಗೆ?
ಸುನಾಮಿ ಜಲಪ್ರಳಯದಲಿ ಅವಿತು
ದೈತ್ಯಾಕಾರದಲಿ ಬಂದು
ಕೈಯಾರೆ ಕೊಚ್ಚಿ ಕೊಚ್ಚಿ ಸದೆಬಡೆದು
ಸದ್ದಡಗಿಸುತಿರುವೆಯಲ್ಲ!

ಇನ್ನೂ ಸಾಕಾಗಲಿಲ್ಲವೆ ತಾಯಿ
ಮತ್ತೆ ಮತ್ತೆ ಗರ್ಜಿಸಿ
ಭೂಕಂಪಿಸುತ ಬುಸುಗುಡುತಿರುವಿ
ಕ್ಷಣ ಮಾತ್ರದಲಿ ನೆಲದಡಿಗೆ ಸೇರಿದ
ನಿನ್ನ ಮಕ್ಕಳ ಆಕ್ರಂದನ ಕೇಳುತಿರುವಿಯಾ
ಯಾಕೆ ಜನನಿ ನಿನ್ನೆದೆ ಕಲ್ಲಾಯಿತು
ಕಿವಿ ಕಿವುಡಾಯಿತು!

ಯುದ್ಧ ಭಯೋತ್ಪಾದನೆಗೆ ಕುಮ್ಮಕ್ಕು
ಕೊಡುವ ರಾಕ್ಷಸ ರಾಜಕೀಯ
ಮಕ್ಕಳ ಕಂಡು ಕೆಂಡವಾದೆಯಾ
ವಿಜ್ಞಾನದೊತ್ತಡಕೆ ಪರಿಸರ ಹಾನಿಗೆ
ಎದೆ ಭಾರವಾಯಿತೆ
ಕಣ್ತುಂಬ ಕೆಂಡದುಂಡೆ ಮೈತುಂಬಾ
ಬೆಂಕಿ ಹೊತ್ತು ತತ್ತರಿಸದಿರು ತಾಯಿ
ಅವರವರ ಕರ್ಮಫಲ ಎನದಿರು ಮತ್ತೆ!

ನೀನೇ ಹಡೆದ ನೂರಾರು ಮಕ್ಕಳಿವರು
ಮುದ್ದಿಸಿ ಸಾಕಿ ಸಲುಹಿ ಆಕಾಶದೆತ್ತರಕೆ ಬೆಳೆಸಿದೆ
ಆದರೊಬ್ಬನೂ ಹತ್ತಿರವಿಲ್ಲ ನಿನ್ನ ಕರುಳಿಗೆ
ಸ್ವಾರ್ಥಿ ಮಕ್ಕಳ ಸಹವಾಸ ಸಾಕಾಯಿತೆ
ಮತ್ತೆ ಮತ್ತೆ ಆಚೆಗೆ ದಬ್ಬುತಲೇ ಇರುವೆ
ಹುಲುಮಾನವರ ಹೆತ್ತಿದ್ದಕ್ಕೆ ಹೊತ್ತಿದ್ದಕ್ಕೆ
ಪಶ್ಚಾತ್ತಾಪ ಪಡುತಿರುವೆಯಾ ತಾಯಿ,
ನಿನ್ನ ಉಡಿ ಸ್ಮಶಾನ ಮಾಡದಿರು
ಕ್ಷಮಿಸು ಜಗಜ್ಜನನಿ ಬಹುರೂಪಿಣಿ.
*****

ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಚ್ಚೆ ಸಿಟಿ ರವಿಗಿಂತ ರವಷ್ಟು ನಾನ್ ಹೆಚ್ಚೆ ಅಂದ ನಾಗ್ರಾವು ಸೆಟ್ಟಿ
Next post ಎಲ್ಲಿ ಪ್ರಿಯಕರ ಹೇಳಿ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys